Monday, March 21, 2011

ನಿಲ್ಲಿ ಗುಬ್ಬಿಗಳೆ, ಎಲ್ಲಿ ಓಡುವಿರಿ, ನಮ್ಮ ಮನೆಗೆ ಬನ್ನಿ

ಬ್ಬಚ್ಚಿಗಳೆಂದರೆ ಯಾರಿಗೆ ತಾನೇ ಇಷ್ಟವಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಕುತೂಹಲಕ್ಕೆ ಕಾರಣವಾದ ಪಕ್ಷಿಯದು. ಇಷ್ಟ ಬಂದಲ್ಲಿ ಕೂತು ಕಲರವ ಎಬ್ಬಿಸಿ ಪುಟಪುಟನೆ ಜಿಗಿದು, ಅತ್ತಿಂದಿತ್ತ ಹಾರುತ್ತ ಕಣ್ಣುಗಳಿಗೆ ವ್ಯಾಯಾಮ ಕೊಡುವ, ಸೋಮಾರಿ ಮಾನವನಿಗೆ ಬದುಕನ್ನು ಕಲಿಸಿಕೊಡುವ ಹಿಡಿಗಾತ್ರದ ಚಿಲಿಪಿಲಿ ಜೀವಗಳು ಇಂದು ತೀರಾ ಅಪರೂಪವಾಗುತ್ತಿವೆ.

ಮೊದಲೆಲ್ಲ ಬಸ್ಸು-ರೈಲು ನಿಲ್ದಾಣಗಳ ಚಾವಣಿಗಳಡಿಯಲ್ಲಿ, ಅಂಗಡಿಗಳ ಶಟರು ಬಾಗಿಲಿನ ಮೇಲುಗಡೆಯಲ್ಲಿ, ತಾರಸಿ ಕಟ್ಟಡಗಳಲ್ಲಿ ಉಳಿದು ಹೋದ ಜಾಗಗಳಲ್ಲಿ, ಒಡೆದು ಹೋದ ಗೋಡೆಯ ಬಿರುಕಿನಲ್ಲಿ, ಹೆಂಚಿನ ಮನೆಗಳ ಪಕ್ಕಾಸುಗಳಲ್ಲಿ -- ಹೀಗೆ ಮನುಷ್ಯನಿಗೆ ಬಳಕೆಯಾಗದ ಸ್ಥಳಗಳು ಗುಬ್ಬಿಗಳಿಗೆ ಮನೆಯಾಗುತ್ತಿದ್ದವು. ಅಲ್ಲೆಲ್ಲ ಅದರ ಕಿಚಿಕಿಚಿ ಕೇಳಿ ಬರುತ್ತಿತ್ತು. ಆದರೆ ಮಾನವನ ಆಧುನಿಕತೆಯ ಲೋಲುಪತೆಗೆ ನಿರುಪದ್ರವಿಗಳ ಸಾಲಿನ ಮೊದಲನೇ ಹಕ್ಕಿ ಪರೋಕ್ಷವಾಗಿ ಬಲಿಯಾಗಿದೆ, ಆಗುತ್ತಿದೆ. ನಮ್ಮ ಕಣ್ಣುಗಳಿಂದ ಆ ಪಕ್ಷಿಯೀಗ ವೇಗವಾಗಿ ಕಣ್ಮರೆಯಾಗುತ್ತಿದೆ.ಮನೆಯೊಳಗೆ, ಮಕ್ಕಳ ಜತೆ ಕಣ್ಣಾಮುಚ್ಚಾಲೆಯಾಡುವಂತೆ ಬಂದು-ಹೋಗುತ್ತಿದ್ದವು. ಮುಟ್ಟಬೇಕೆನ್ನುವಾಗ ಪುರ್ರನೆ ಹಾರಿ ಕಿಟಕಿಯ ರಾಡುಗಳಲ್ಲಿ ಕೂರುತ್ತಿದ್ದವು. ಅಲ್ಲಿಗೂ ಚಿಣ್ಣರು ದಾಂಗುಡಿಯಿಟ್ಟಾಗ ಹೆಚ್ಚೇನೂ ಹೆದರದೆ ಅದಕ್ಕಿಂತ ಮೇಲಿನ ಜಾಗವನ್ನಷ್ಟೇ ಹುಡುಕುತ್ತಿದ್ದವು. ಕಿಚ್‌ಕಿಚ್ ಎನ್ನುತ್ತಾ ಮತ್ತೆ ಬರುತ್ತಿದ್ದವು. ಈಗಿನ ಮಕ್ಕಳಿಗೆ ಗುಬ್ಬಿಯೆಂದರೆ ಟ್ವಿಟ್ಟರ್ ಸಿಂಬಲ್‌ಗಿಂತ ಹೆಚ್ಚೇನೂ ಆಗಿರಲಾರದು.

ವಾಸ್ತವದಲ್ಲಿ ಗುಬ್ಬಚ್ಚಿ ದಟ್ಟ ಕಾಡಿನಲ್ಲಿ ಅಥವಾ ಮಾನವ ರಹಿತ ಪ್ರದೇಶಗಳಲ್ಲಿ ವಾಸಿಸುವ ಪಕ್ಷಿಯೇ ಅಲ್ಲ. ಕಂದು ಬಣ್ಣದಿಂದ ಕಂಗೊಳಿಸುವ, ಅಲ್ಲಲ್ಲಿ ಬಿಳಿ ಮತ್ತು ಕಪ್ಪು ಮಿಶ್ರಿತ ಬಣ್ಣಗಳನ್ನು ಹೊಂದಿರುವ ಸಂಘಜೀವಿ. ಅದಕ್ಕೆ ಜನನಿಬಿಡತೆ ಯಾವತ್ತೂ ತೊಂದರೆ ಅನ್ನಿಸಿದ್ದೂ ಇಲ್ಲ. ಜನರ ನಡುವೆಯಿದ್ದರೂ ತನ್ನ ಬದುಕು ಬೇರೆಯೇ ಎಂಬಂತೆ ಬದುಕುತ್ತಿದ್ದ ಚೆಂದನೆಯ ಹಕ್ಕಿಯದು.

ಕಾಗೆ-ನವಿಲು ಕೊಡುವ ರೀತಿಯ ತೊಂದರೆಗಳ ಕಿರಿಕಿರಿಯೂ ಅವುಗಳ ಮೇಲಿಲ್ಲ. ಆದರೂ ಅವುಗಳ ನಿರ್ಗಮನಕ್ಕೆ ಮಾನವನೇ ಪ್ರಮುಖ ಕಾರಣ. ಅವುಗಳನ್ನು ನಾವು ಓಡಿಸಿಲ್ಲವಾದರೂ, ಅವುಗಳು ಓಡಿ ಹೋಗಿರುವುದರಲ್ಲಿ ನಮ್ಮ ಪಾಲೇ ಗರಿಷ್ಠ. ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಸುತ್ತ ಹಾರುವುದಕ್ಕಿಂತ ಹೆಚ್ಚಾಗಿ ಜಿಗಿಯುತ್ತಿದ್ದ ಹಕ್ಕಿಯೀಗ ಕಣ್ಮರೆಯಾಗಿದೆ. ಪಕ್ಷಿಪ್ರಿಯರಿಗೆ ನಿರಾಸೆಯಾಗಿದೆ

Thursday, June 3, 2010

ಮುಂಗಾರಿನ ಆ ದಿನಗಳು

ಹಲೋ,
ಇನ್ನೇನು ಮಳೆಗಾಲ ಪ್ರಾರಂಭವಾಗಲಿದೆ. ರೈತರಿಗೆ ಸಂತೋಷ ತಂದರೆ, ನಗರವಾಸಿಗಳು ಶಪಿಸುತ್ತ ಸ್ವಾಗತಿಸಲೇ ಬೇಕಾಗಿದೆ. ಮುಂಗಾರಿನ ಅ ಅದ್ಬುತ ಕ್ಷಣಗಳನ್ನೂ ಅನುಭವಿಸಿದ ನನ್ನ ಬಾಲ್ಯದ ನೆನಪು ಮತ್ತೆ ಮತ್ತೆ ನೆನಪಾಗುತ್ತಿದೆ. ಮಳೆಗಾಲ ಪ್ರಾರಂಭವಾದೊಡನೆ ತಂದೆಯೊಂದಿಗೆ ಹೊಸ ಪಾದರಕ್ಷೆಗಾಗಿ ಜಗಳವಾಡಿದ ಆ ದಿನಗಳು, ಮಳೆಯಲ್ಲಿ ನೆನೆಯುತ್ತ ಶಾಲೆಗೆ ಹೊಗಿದ ಆ ಕ್ಷಣ, ಸ್ನೇಹಿತನೊಡನೆ ಒಂದೇ ಕೊಡೆಯೊಳಗೆ ಶಾಲೆಗೆ ಹೋಗಿದ ಆ ದಿನಗಳು ಒಂದೇ ಎರಡೇ , ಜೋರಾಗಿ ಮಳೆಗಾಲ ಪ್ರಾರಂಭವಾಗಿ ಕೆರೆ ಹಳ್ಳಗಳು ತುಂಬಿ ಹರಿಯುತ್ತಿದರೆ ಏನೋ ಒಂದು ಸಂತೋಷ. ರೈತರ ಬೆಳೆಗಳು ನಶವಾಗುತ್ತಿದ್ದರೆ ನಮಗೆ ಇನ್ನು ಜೋರಾಗಿ ಮಳೆ ಸುರಿಯಲಿ ಎಂಬ ಪ್ರಾರ್ಥನೆ ( ಯಾಕೆಂದರೆ ಶಾಲೆಗೆ ರಜಾ ಕೊಟ್ಟರು ಎಂಬ ದುರಾಲೋಚನೆ ). ಎಡ ಬಿಡದೆ ಸುರಿಯುತ್ತಿವ ಮಳೆ ಎಲ್ಲರನ್ನು ಆತಂಕದಲ್ಲಿ ದೂಡುತ್ತಿದ್ದರೆ ನಮೆಗೆ ಅದು ಯಾವದೇ ಪರಿವಯೇ ಇಲ್ಲದೆ ನೀರಿನಲ್ಲಿ ಆಟ ಆಡುತ್ತ ನಮ್ಮದೇ ಲೋಕದಲ್ಲೂ ವಿಹರಿಸುತ್ತಾ ಇದ್ದ ಆ ಕ್ಷಣಗಳು.
ಮಳೆಗಾಲವೆಂದರೆ ಹೆದರಿ ಮನೆಯಲ್ಲಿ ಕುಳಿತುಕೊಳ್ಳುವ ಬೆಂಗಳೂರಿಗರನ್ನು ನೋಡಿದಾಗ ಇವೆಲ್ಲವೂ ನೆನಪಾಯಿತು .
ಅದಕ್ಕೆ ಗೀಚಿದ್ದೇನೆ .
ಸ್ವಾಗತವಿರಲಿ ,

ನಿಮ್ಮವ,
ಶರತ್ ಭಟ್

Tuesday, June 1, 2010

ವಿಶ್ವಕಪ್ ಫೂಟ್ ಬಾಲ್

ಹಲೋ,
ಒಲಂಪಿಕ್ ನಂತರ ಜಗತ್ತಿನ ಅತೀ ದೊಡ್ಡ ಕ್ರೀಡಾ ಕೂಟವಾದ ಫೂಟ್ ಬಾಲ್ ವಿಶ್ವಕಪ್ ಗೆ ಕ್ಷಣ ಗಣನೆ ಪ್ರಾರಂಭವಾಗಿದೆ . ಏಕೋ ನನ್ನ ಮನಸ್ಸು ಕಳೆದ ಕೆಲವು ದಿನಗಳಿಂದ ಅದನ್ನೇ ಯೋಚಿಸುತ್ತಿದ್ದೆ . ಭಾರತ ಪಾಲ್ಗೊಳ್ಳುತ್ತಿಲ್ಲ ಎಂಬ ಬೇಸರವಾದರೆ ಆಟದ ಸೊಬಗನ್ನು ಅಸ್ವಾದಿಸಲು ಕಾತುರನಾಗಿರುವೆ.

ಬೆಕಮ , ಬಲ್ಲಕ್ ಗಾಯದ ಕಾರಣದಿಂದ ಪಂದ್ಯಾವಳಿ ಇಂದ ಹೊರಗೆ ಇರವುದು ಹಾಗು ರೋನಲ್ದಿಹೋ, ಅದ್ರಯಾನೋ ಬ್ರಜಿಲ್ ತಂಡದ ಕೋಚ್ ಹೊರಗೆ ಇಟ್ಥಿರುವದು ಆಶ್ಚರ್ಯವಾಗಿದೆ. ಜೂನ್ ೧೧ ರಿಂದ ಪ್ರಾರಂಭವಾಗಲಿರುವ ಇ ಮೇಳಕ್ಕೆ ಜಗತ್ತಿನ ಪ್ರಭಲ ೩೨ ದೇಶಗಳು ಪಾಲ್ಗೊಳ್ಳುತ್ತಿವೆ. ಸ್ಪೇನ್, ಅರ್ಜಂಟಿನ , ಬ್ರಾಜಿಲ್ ಗೆಲ್ಲುವ ನೆಚ್ಚಿನ ತಂಡಗಳಗಿದ್ದರೆ, ಇಂಗ್ಲೆಂಡ್ ಫ್ರಾನ್ಸ್ ಜರ್ಮನಿ ತಂಡಗಳು ಕೂಡ ಪ್ರಶಷ್ಟಿಗಾಗಿ ಹೋರಾಡಲು ಸನ್ನದ್ದವಾಗಿದೆ . ಅಂತು ಜೂನ್ ೧೧ ರಿಂದ ೧ ತಿಂಗಳು ಕ್ರೀಡಾ ಪ್ರೇಮಿಗಳಿಗೆ ರಸದೌತಣ ನೀಡಲು ವಿಶ್ವಕಪ್ ಫೂಟ್ ಬಾಲ್ ಸಿದ್ದವಾಗಿದೆ.

Sunday, May 30, 2010

ಬ್ಲಾಗ್

ನನ್ನ ಆತ್ಮೀಯ ಸ್ನೇಹಿತರೆ,

ನಾನು ಕೂಡ ಬಹಳ ದಿನಗಳಿಂದ ಕೇಳುತ್ತಿದ್ದ ಬ್ಲಾಗ್ ಬಗ್ಗೆ ಕುತೂಹಲದಿಂದ ಇಣುಕಿ ನೋಡಿದಾಗ ಸ್ವಲ್ಪ ಏನಾದರು ಬರೆಯಬೇಕೆಂದು ಅನಿಸುತ್ತಿದ್ದೆ. ಅದಕ್ಕಾಗಿ ತಯಾರಿಯಲ್ಲಿ ಇರುವೆ .

ಸಂತೋಷದೊಂದಿಗೆ,
ನಿಮ್ಮವ,
ಶರತ್ ಭಟ್