Thursday, June 3, 2010

ಮುಂಗಾರಿನ ಆ ದಿನಗಳು

ಹಲೋ,
ಇನ್ನೇನು ಮಳೆಗಾಲ ಪ್ರಾರಂಭವಾಗಲಿದೆ. ರೈತರಿಗೆ ಸಂತೋಷ ತಂದರೆ, ನಗರವಾಸಿಗಳು ಶಪಿಸುತ್ತ ಸ್ವಾಗತಿಸಲೇ ಬೇಕಾಗಿದೆ. ಮುಂಗಾರಿನ ಅ ಅದ್ಬುತ ಕ್ಷಣಗಳನ್ನೂ ಅನುಭವಿಸಿದ ನನ್ನ ಬಾಲ್ಯದ ನೆನಪು ಮತ್ತೆ ಮತ್ತೆ ನೆನಪಾಗುತ್ತಿದೆ. ಮಳೆಗಾಲ ಪ್ರಾರಂಭವಾದೊಡನೆ ತಂದೆಯೊಂದಿಗೆ ಹೊಸ ಪಾದರಕ್ಷೆಗಾಗಿ ಜಗಳವಾಡಿದ ಆ ದಿನಗಳು, ಮಳೆಯಲ್ಲಿ ನೆನೆಯುತ್ತ ಶಾಲೆಗೆ ಹೊಗಿದ ಆ ಕ್ಷಣ, ಸ್ನೇಹಿತನೊಡನೆ ಒಂದೇ ಕೊಡೆಯೊಳಗೆ ಶಾಲೆಗೆ ಹೋಗಿದ ಆ ದಿನಗಳು ಒಂದೇ ಎರಡೇ , ಜೋರಾಗಿ ಮಳೆಗಾಲ ಪ್ರಾರಂಭವಾಗಿ ಕೆರೆ ಹಳ್ಳಗಳು ತುಂಬಿ ಹರಿಯುತ್ತಿದರೆ ಏನೋ ಒಂದು ಸಂತೋಷ. ರೈತರ ಬೆಳೆಗಳು ನಶವಾಗುತ್ತಿದ್ದರೆ ನಮಗೆ ಇನ್ನು ಜೋರಾಗಿ ಮಳೆ ಸುರಿಯಲಿ ಎಂಬ ಪ್ರಾರ್ಥನೆ ( ಯಾಕೆಂದರೆ ಶಾಲೆಗೆ ರಜಾ ಕೊಟ್ಟರು ಎಂಬ ದುರಾಲೋಚನೆ ). ಎಡ ಬಿಡದೆ ಸುರಿಯುತ್ತಿವ ಮಳೆ ಎಲ್ಲರನ್ನು ಆತಂಕದಲ್ಲಿ ದೂಡುತ್ತಿದ್ದರೆ ನಮೆಗೆ ಅದು ಯಾವದೇ ಪರಿವಯೇ ಇಲ್ಲದೆ ನೀರಿನಲ್ಲಿ ಆಟ ಆಡುತ್ತ ನಮ್ಮದೇ ಲೋಕದಲ್ಲೂ ವಿಹರಿಸುತ್ತಾ ಇದ್ದ ಆ ಕ್ಷಣಗಳು.
ಮಳೆಗಾಲವೆಂದರೆ ಹೆದರಿ ಮನೆಯಲ್ಲಿ ಕುಳಿತುಕೊಳ್ಳುವ ಬೆಂಗಳೂರಿಗರನ್ನು ನೋಡಿದಾಗ ಇವೆಲ್ಲವೂ ನೆನಪಾಯಿತು .
ಅದಕ್ಕೆ ಗೀಚಿದ್ದೇನೆ .
ಸ್ವಾಗತವಿರಲಿ ,

ನಿಮ್ಮವ,
ಶರತ್ ಭಟ್